ಪೋಸ್ಟ್‌ಗಳು

ಜೂನ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಳಕಲ್ಲ ತಾಲೂಕು ಜಂಗಮ ಸಮಾಜದ ವತಿಯಿಂದ ತಹಶೀಲ್ದಾರರಿಗೆ ಮನವಿ

ಇಮೇಜ್
ಇಳಕಲ್ಲ:- ಇಳಕಲ್ಲ ತಾಲೂಕಿನ ವೀರಮಾಹೇಶ್ವರ ಜಂಗಮ ಸಮಾಜದ ಬಾಂಧವರಿಂದನಗರದ ನಿರೀಕ್ಷಣ ಮಂದಿರದ ಮುಂಭಾಗದಲ್ಲಿರುವ ಆದಿ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಇಂದು ಮುಂಜಾನೆ ೧೧ ಕ್ಕೆ ಪ್ರಾರಂಭ ಜಂಗಮ ಸಮಾಜದವರ ನಡಿಗೆ ಬಸ್ ನಿಲ್ದಾಣ, ಮಾರ್ಗವಾಗಿ ಕಂಠಿ ವೃತ್ತದಲ್ಲಿ ಕಂಠಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಪ್ರಾಮಾಣಿಕವಾಗಿ ವಿಚಾರಣೆ ಮಾಡಿ ಯಾವುದೇ ಒತ್ತಡಕ್ಕೂ ಮಣೆಯದೆ ಕೆಲಸ ಮಾಡಿರುವ ಕರ್ನಾಟಕ ಸರ್ಕಾರ ಪೊಲೀಸ ಇಲಾಖೆ ಕಮಿಷನರ್ ಬಿ ದಯಾನಂದ,ಡಿಸಿಪಿ ಗೀರಿಶ್ ಎಸಿಪಿ ಚಂದನ,ಎಸ್ .ನ್ಯಾಯಾಂಗ ಇಲಾಖೆ ಪಿ.ಪಿ ಪ್ರಸನ್ನ ಕುಮಾರ,ಅವರಿಗೆ ಜಂಗಮ ಸಮಾಜದ ಭಾಂಧವರು ಪುಷ್ಪರುಷ್ಠಿ ಮಾಡುವ ಮೂಲಕ ಅಭಿನಂದನೆಯನ್ನು ತಿಳಿಸಿದರು.ಈ ಅಭಿನಂದನಾ ನಡಿಗೆ ಇಳಕಲ್ಲ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ, ಸಂಗಮೇಶ್ ಜಾವುರಮಠ ಮಾತನಾಡಿ ರೇಣುಕಾ ಸ್ವಾಮಿ ಬರ್ಬರ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಪ್ರಾಮಾಣಿಕವಾಗಿ ವಿಚಾರಣೆ ಮಾಡಿದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಯನ್ನು ತಿಳಿಸಿದರು.ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಹತ್ತೆಯಾದ ರೇಣುಕಾ ಸ್ವಾಮಿಯ ಧರ್ಮಪತ್ನಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಸಮಾಜದ ಪರವಾಗಿ ಒತ್ತಾಯ ಮಾಡಿದರು. ಸಮಾಜದ ಹಿ...

ಸರ್ಕಾರಿ ಶಾಲಾ ಮಕ್ಕಳ ಸಹಾಯಕ್ಕೆ ನಿಂತ ನಿರುಪಾದಿ ಕೆ ಗೋಮರ್ಸಿ

ಇಮೇಜ್
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆ ಕುನ್ನಟಗಿ ಗ್ರಾಮದಲ್ಲಿ 2024-25 ರ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದ ಸುಮಾರು 20 ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್, ನೋಟ್ ಬುಕ್,ಪೆನ್ನು,ಪೆನ್ಸಿಲ್ ವಿತರಣೆ ಮಾಡಲಾಯಿತು.        ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರುಪಾದಿ ಕೆ ಗೋಮರ್ಸಿ ನಮ್ಮ ವೇದಿಕೆಯು ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಶ್ರಮ ಪಡುತ್ತಿದೆ. ನಮ್ಮ ವೇದಿಕೆಯ ಉದ್ದೇಶವೂ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳ ವಸ್ತುಗಳನ್ನು ವಿತರಿಸುವುದು ಹಾಗೂ ಮಕ್ಕಳು ಕಲಿಕೆಯಲ್ಲಿ ಉತ್ಸಾಹ ಉಲ್ಲಾಸ ಆಸಕ್ತಿಯಿಂದ ಕಲಿಯುವಂತೆ ಮಾಡುವುದು.           ಮಕ್ಕಳ ಪಾಲಕ ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸವು ಹೊರೆ ಆಗದಂತೆ ನೋಡಿಕೊಳ್ಳುವುದಾಗಿದೆ ಜೊತೆಗೆ ಸರ್ಕಾರಿ ಶಾಲೆ ಕಲಿಕೆಯ ಗುಣಮಟ್ಟ,ಪರಿಸರ, ಮಹತ್ವದ ಕುರಿತಾದ ಅರಿವು ಮೂಡಿಸುವುದಾಗಿದೆ ಎಂದು ತಿಳಿಸಿದರು.       ಇದೇ ಸಂದರ್ಭದಲ್ಲಿ ಮುಖಂಡರಾದ ಅಜೀದ್ ಪಾಶ,ಅಯ್ಯಪ್ಪ ಮೇಟಿ,ಶರಣಪ್ಪ ಬೇರಗಿ,ಶಂಶುದ್ದೀನ್ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು,ಶಾಲೆಯ ಆಡಳಿತ ಮಂಡಳಿ ಭಾಗವಹಿಸಿದ್ದರು.

ಸಾಹಿತ್ಯ ಲೊಕಕ್ಕೆ ಕಮಲಾ ಹಂಪನಾ ಅವರ ಕೊಡುಗೆ ಅಪಾರ

ಇಮೇಜ್
ಕುಷ್ಟಗಿ: ಸಾಹಿತ್ಯ ಲೊಕಕ್ಕೆ ಕಮಲಾ ಹಂಪನಾ ಅವರ ಕೊಡುಗೆ ಅಪಾರವಾಗಿದ್ದು ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಹಿರಿಯ ಸಾಹಿತಿ ಕೆ ವೈ ಕಂದಕೂರು ಅವರು ಅಭಿಪ್ರಾಯಪಟ್ಟರು. ತಾಲೂಕಿನ ದೋಟಿಹಾಳ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ದೋಟಿಹಾಳ-ಕೇಸೂರು ವತಿಯಿಂದ ಸಾಹಿತಿ ಡಾ.ಕಮಲಾ ಹಂಪನಾ ಅವರು ನಿಧನರಾದ ಹಿನ್ನಲೆಯಲ್ಲಿ ನುಡಿ ನಮನವನ್ನು ಸಲ್ಲಿಸಲಾಯಿತು. ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದರು  ಡಾ.ಕಮಲಾ ಹಂಪನಾ ಅವರು ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದರು ಅವರ ಕೃತಿಗಳು ಅದ್ಬುತವಾಗಿವೆ ಎಂದರು.        ಸಾಹಿತಿ ನಿಂಗಪ್ಪ ಸಜ್ಜನ ಮಾತನಾಡಿ ಡಾ.ಕಮಲಾ ಹಂಪನಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡು ಬಿದಿರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದರು ಹಂಪನಾ ಅವರ ಬರವಣಿಗೆಯು ದೊಡ್ಡದಾಗಿದೆ. ಹಂಪನಾ ಅವರ ಲೇಖನಗಳು, ಸಂಶೋಧನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಸಾಹಿತ್ಯ ಲೋಕಕ್ಕೆ ಹೆಮ್ಮೆ ತಂದಿದ...

ಯಶಸ್ಸಿಗೆ ಕೇವಲ ಅದೃಷ್ಟ ಅಷ್ಟೇ ಅಲ್ಲ ಅದನ್ನ ಸಾಕಾರಗೊಳಿಸಲು ಅಗತ್ಯ ತಯಾರಿಯೂ ಅಷ್ಟೇ ಮುಖ್ಯ: ಐಶ್ವರ್ಯ ಡಿಕೆಎಸ್ ಹೆಗ್ಡೆ

ಇಮೇಜ್
 ಬೆಂಗಳೂರು ಜೂನ್ 23: ಯಶಸ್ಸಿಗೆ ಕೇವಲ ಅದೃಷ್ಟ ಅಷ್ಟೇ ಅಲ್ಲ ಅದನ್ನ ಸಾಕಾರಗೊಳಿಸಲು ಅಗತ್ಯ ತಯಾರಿಯೂ ಅಷ್ಟೇ ಮುಖ್ಯ ಎಂದು ಗ್ಲೋಬಲ್ ಅಕಾಡೆಮಿ ಅಪ್ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕರಾದ ಐಶ್ವರ್ಯ ಡಿಕೆಎಸ್ ಹೆಗ್ಡೆ ಅಭಿಪ್ರಾಯಪಟ್ಟರು. ಇಂದು ಹೆಸರುಘಟ್ಟ ರಸ್ತೆಯಲ್ಲಿ ಇರುವ ಸೌಂದರ್ಯ ಕಾಂಪೋಸಿಟ್‌ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಒರಿಯೆಂಟೇಶನ್ ಕಾರ್ಯಕ್ರಮ ಇಗ್ನೈಟ್‌ 2024 ಗೆ ಚಾಲನೆ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಜೀವನದಲ್ಲಿ ಶಿಕ್ಷಣ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉತ್ತಮ ಶಿಕ್ಷಣ ನಮ್ಮ ಉತ್ತಮ ಜೀವನದ ಗಟ್ಟಿ ಬೇರುಗಳಾಗಿವೇ.       ಸೌಂದರ್ಯ ಶಿಕ್ಷಣ ಸಂಸ್ಥೆ ಗಳಂತಹ ಉತ್ತಮ ಸಂಸ್ಥೆಗಳು ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ. ನಮ್ಮ ಮಕ್ಕಳು ತಮ್ಮ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸಬೇಕು. ಈ ಬೆಳವಣಿಗೆಯಲ್ಲಿ ಪೋಷಕರದ್ದು ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಯಾವುದೇ ಕ್ಷೇತ್ರದಲ್ಲಾದರೂ ಕೂಡಾ ಯಶಸ್ಸು ಪಡೆಯಲು ಕೇವಲ ಅದೃಷ್ಟ ಸಾಕಾಗಲ್ಲ. ಅದೃಷ್ಟದಿಂದ ದೊರೆತಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳುವುದು ಬಹಳ ಮುಖ್ಯ. ಸೋಲನ್ನ ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.  ...

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಯೋಗ ದಿನಾಚರಣೆ

ಇಮೇಜ್
ಹುನಗುಂದ :ಮೂಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜಾನೆ 7.30ಕೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕೆ ಯೋಗ ಅವಶ್ಯಕವಾಗಿದ್ದು. ಮಕ್ಕಳಲ್ಲಿ ದೈಹಿಕ,ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ಸದೃಢತೆಯನ್ನು ತರುವುದಕ್ಕೆ ಯೋಗ ಅವಶ್ಯಕವಾಗಿದ್ದು.ಪ್ರತಿಯೊಬ್ಬರು ದಿನ ನಿತ್ಯ ಯೋಗ, ಪ್ರಾಣಾಯಾಮಗಳನ್ನು ತಪ್ಪದೆ ಮಾಡಬೇಕೆಂದು ಯೋಗ ಶಿಕ್ಷಕರಾದಂತ ಕಿರಣ್  ಮಕ್ಕಳಿಗೆ ಸಲಹೆ ನೀಡಿದರು.       ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಂ. ಜಿ.ಗೌಡರ್ ರವರು ಯೋಗ ಮಾಡಿ ರೋಗದಿಂದ ದೂರವಿರಿ ಒಳ್ಳೆಯ ಆರೋಗ್ಯದಿಂದ ಮಾತ್ರ ಸದೃಢವಾದ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ ,ಎಂದು ಮಕ್ಕಳಿಗೆ ಸಲಹೆ ನೀಡಿದರು.         ಶಾಲೆ ಶಿಕ್ಷಕರಾದ ಶ್ರೀ ಈರೇಶ ಕಲಗುಡಿ ಶ್ರೀ ಶ್ರೇಯಾಂಶ ಕೋಲ್ಹಾರ ಶ್ರೀಮತಿ ಶ್ರೀದೇವಿ ಚಳಗೇರಿ ಶ್ರೀಮತಿ ಮಂಜುಳಾ ಕಲಗುಡಿ ಆಯುಷ್ಮಾನ್ ಇಲಾಖೆಯ ವೈದ್ಯಾಧಿಕಾರಿ ಶ್ರೀಮತಿ ಸುರೇಖಾ ಚೂರಿ ಮೇಡಮ್ ಮತ್ತು ಆಯುಷ್ಮಾನ್ ಇಲಾಖೆ ಸಿಬ್ಬಂದಿಯಾದ ಶ್ರೀ ರವಿ ಓಗಿ ಅವರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಶಾಲೆಯ ಮಕ್ಕಳೆಲ್ಲ ವಿವಿಧ ಯೋಗದ ಆಸನಗಳನ್ನು ಮತ್ತು ನೃತ್ಯದ ಸಂಯೋಜನೆಯಲ್ಲಿ ಯೋಗವನ್ನು ಮಾಡುವುದರ ಮೂಲಕ ಯೋಗ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.

ನಂದವಾಡಗಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಇಮೇಜ್
ನಂದವಾಡಗಿ ೨೧: ಬಾಗಲಕೋಟೆ ಜಿಲ್ಲೆಯ ಹುನಗುಂದ / ಇಲಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಜೂನ್ ೨೧ ರಂದು ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಥೀಮ್ ದೊಂದಿಗೆ ೨೦೨೪ ರ ವಿಶ್ವ ದಿನಾಚರಣೆಯನ್ನು ಶಾಲೆಯ ಸಹ ಶಿಕ್ಷಕಿಯರು ಶ್ರೀಮತಿ ಜ್ಯೋತಿ ಮೇಡಂ ಸಸಿಗೆ ನೀರೆರುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.                    ಯೋಗದಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಸಾಧ್ಯ ಎಂದು ಹೇಳಿದರು. ನಂತರದಲ್ಲಿ ಮಕ್ಕಳಿಗೆ ಯೋಗದ ಮಹತ್ವ ಹಾಗೂ ಬಳಕೆ ಮಾಡುವ ಬಗ್ಗೆ ತಿಳಿಸಲಾಯಿತು. ವಿದ್ಯಾರ್ಥಿನಿಯರಿಗೆ ವಿವಿಧ ಯೋಗದ ಪರಿಚಯ ಮಾಡಿ ಅದರ ಮಹತ್ವ ಮಾಡಿ ಕೊಡಲಾಯಿತು. ವಿದ್ಯಾರ್ಥಿನಿಯರಿಗೆ ವಿವಿಧ ಭಂಗಿಯ ಯೋಗಾಸನ ಮಾಡಿಸಿ, ಪ್ರತಿನಿತ್ಯ ಇವುಗಳನ್ನು ರೂಢಿಸಿಕೊಳ್ಳಬೇಕೆಂದು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲಾ ಮಕ್ಕಳು ಆಸಕ್ತಿಯಿಂದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.        ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಶಾಲಾ ಎಸ್ ಡಿ ಎಂ ಸಿ ಸರ್ವ ಸದಸ್ಯರು,ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಸಹ ಶಿಕ್ಷಕಿಯರು ಶ್ರೀಮತಿ ಜಿ ಆರ್ ನದಾಫ್, ಸಹ ಶಿಕ್ಷಕರು ಶ್ರೀ ಶಿವಾನಂದ ಬಳುಲದ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರಶೇ...

ಬೆಳೆವಿಮೆ ಪರಿಹಾರ ಜಮಾ ಮಾಡಿಸುವಂತೆ ರೈತರಿಂದ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಕೆ

ಇಮೇಜ್
ಇಳಕಲ್ :  ಕರ್ನಾಟಕ ರಾಜ್ಯ ರೈತ ಸಂಘ ಇಳಕಲ್ಲ ಹುನಗುಂದ ರೈತ ಸಮಾಜ ಮತ್ತು ಗ್ರಾಮೀಣ ಭಾಗದ ಹಿರೇಓತಗೇರಿ  ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಗೂ  ವಿವಿಧ ಗ್ರಾಮಗಳ ರೈತರು ತಾವು ತುಂಬಿದ 2023-24 ನೇ ಸಾಲಿನ ಹಿಂಗಾರು ಬೆಳೆವಿಮೆಯನ್ನು ನಷ್ಟಕ್ಕೆ ತಕ್ಕಂತೆ ಬೆಳೆವಿಮೆ ಜಮಾ ಮಾಡಿಸುವಂತೆ  ಕೃಷಿ ಸಹಾಯಕ ನಿರ್ದೇಶಕರು ಹುನಗುಂದ/ಇಳಕಲ್ಲ ಕೃಷಿ ಅಧಿಕಾರಿಗಳಾದ ಸೊಮಲಿಂಗಪ್ಪ ಅಂಟರತಾನಿಯವರಿಗೆ  ಮನವಿ  ಸಲ್ಲಿಸಿದರು.         ತಾಲ್ಲೂಕಿನ ರೈತರ ಬೆಳೆಗಳು ನಷ್ಟವಾದರೂ ಬೆಳೆ ವಿಮೆ ಹಣ ಬಾರದೆ ಇರುವ ಕುರಿತು ಬೆಳೆ ವಿಮೆ ಕಟ್ಟಿದ ರೈತರಿಗೆ ಬೆಳೆ ವಿಮೆ ಹಣ ಕೊಡಿಸಿ ಎಂದು ಎಲ್ಲಾ ರೈತರು  ಅರ್ಜಿ ತುಂಬಿ  ಮನವಿ ಪತ್ರ ನೀಡಿದರು.  ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಬಸನಗೌಡ ಪಾಟೀಲ್, ಶರಣಗೌಡ ಕಂದುಕುರ್, ಮತ್ತು ಹಿರೇವತಗಿರಿ ಗ್ರಾಮದ  ರೈತರದ  ಪರಶುರಾಮ್ ಸುಂಕದ,ಅಮರೇಶ ಗುಣಸಾಗರ,ಶಿವಪ್ಪ ಹಿರೇಗೌಡ್ರ,ಮುತ್ತಪ್ಪ ಸುಂಕದ,ಗದಿಗೆಪ್ಪ ಸುಂಕದ, ಎಮ್ ಆರ್ ಗೌಡರ,ಶಿವನಗೌಡ ಗೌಡರ,ಈರಣ್ಣ,ಕೆಂಚನಗೌಡ ಗೌಡರ ಹಾಗೂ ವಿವಿಧ ಗ್ರಾಮದ ರೈತರು ಉಪಸ್ಥಿತರಿದ್ದರು.

೧೦೭ ವರ್ಷಗಳ ಇತಿಹಾಸ ಹೊಂದಿರುವ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯಿಂದ ನೂತನ ಇಂಜಿನಿಯಿರಿಂಗ್‌ ಕಾಲೇಜು ಪ್ರಾರಂಭ

ಇಮೇಜ್
ಬೆಂಗಳೂರು ಜೂನ್‌ ೨೦: ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿರುವ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯಿಂದ ಜಯನಗರದಲ್ಲಿ ಡಾ. ಎಚ್‌.ಎನ್‌ ನ್ಯಾಷನಲ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷದಿಂದ ಇಂಜಿನಿಯರಿಂಗ್‌, ಎಂಬಿಎ ಮತ್ತು ಎಂಸಿಎ ಗೆ ದಾಖಲಾತಿಯನ್ನು ಪ್ರಾರಂಭಿಸಲಾಗುವುದು ಎಂದು ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಕರ್ನಾಟಕದ ಅಧ್ಯಕ್ಷರಾದ ಡಾ. ಹೆಚ್‌ ಎನ್‌ ಸುಬ್ರಮಣ್ಯ ತಿಳಿಸಿದರು.   ಇಂದು ಜಯನಗರದಲ್ಲರುವ ಡಾ. ಎಚ್‌.ಎನ್‌ ನ್ಯಾಷನಲ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಚ್‌ ನರಸಿಂಹಯ್ಯ ಅವರ ಆದರ್ಶಗಳ ಮೇಲೆ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಮೂಲಕ ಮುಂದಿನ ಪೀಳಿಗೆಗೆ ಅನುಕೂಲವಾಗುವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಜಿನೀಯರಿಂಗ್‌ ಕಾಲೇಜನ್ನು ಪ್ರಾರಂಭಿಸಿದ್ದೇವೆ ಎಂದರು.   1917ರಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆಯೊಂದು ಹಲವು ಮಜಲುಗಳನ್ನು ದಾಟಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಎಂದು ನೋಂದಾಯಿತವಾಗಿದೆ. ಕೇವಲ ಪ್ರಾಢಶಾಲೆಯಿಂದ ಪ್ರಾರಂಭವಾದ ಸಂಸ್ಥೆ ಕಾಲಘಟದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ನೀಡುವ ಒಟ್ಟು 21 ಶಾಲಾ ಕಾಲೇಜುಗಳನ್ನು ಸ್ಥಾಪಿಸಿತು. ಬೆಂಗಳೂರಿನ ಬಸವನಗುಡಿ ನ್...

ನ್ಯಾಚುರಲ್ಸ್ನ ಪ್ರಥಮ ‘ಬ್ಯೂಟಿ ಎಂಡ್ ಎಕ್ಸ್ಪಿರಿಯನ್ಸಸ್’ ರೀಟೇಲ್ ಮಳಿಗೆಯನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದ ಸನ್ನಿ ಲಿಯೋನ್

ಇಮೇಜ್
    ಬೆಂಗಳೂರು, ಜೂನ್ 18, 2024: ಭಾರತದಲ್ಲಿ ಕೇಶ ಮತ್ತು ಸೌಂದರ್ಯ ಸಲೋನ್‌ಗಳ ಪೈಕಿ ಅತ್ಯಂತ ದೊಡ್ಡ ಸರಣಿಗಳಲ್ಲಿ ಒಂದಾದ ನ್ಯಾಚುರಲ್ಸ್ ಈಗ ಬಹುಬ್ರಾಂಡ್ ರೀಟೇಲ್ ಮಾರಾಟ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದು, ಸೌಂದರ್ಯ ಉತ್ಪನ್ನಗಳಿಗಾಗಿ ತಮ್ಮ ಮೊದಲ ಮಳಿಗೆಯಾದ - ನ್ಯಾಚುರಲ್ಸ್ ಬಿಎಇ(ಬ್ಯೂಟಿ ಎಂಡ್ ಎಕ್ಸ್ಪಿರಿಯನ್ಸಸ್) ಮಳಿಗೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.   ಜನಪ್ರಿಯ ರೂಪದರ್ಶಿ ಮತ್ತು ನಟಿ ಸನ್ನಿ ಲಿಯೋನ್ ಅವರೊಂದಿಗೆ ನ್ಯಾಚುರಲ್ಸ್ನ ಸ್ಥಾಪಕರಾದ ವೀಣಾ ಕೆ. ಮತ್ತು ನ್ಯಾಚುರಲ್ಸ್ನ ಸಹ ಸ್ಥಾಪಕರು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿ. ಕೆ. ಕುಮಾರವೇಲ್ ಅವರು ನಗರದಲ್ಲಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ನ್ಯಾಚುರಲ್ಸ್ ಬಿಎಇನ ಪ್ರಮುಖ ಮಳಿಗೆಯನ್ನು ಉದ್ಘಾಟಿಸಿದರು.   “ಅತ್ಯಾಧುನಿಕ ತಂತ್ರಜ್ಞಾನವನ್ನು ವೈಯಕ್ತಿಕ ಸೇವೆಯೊಂದಿಗೆ ಸಂಯೋಜಿಸಿ ಒಂದೇ ತಾಣದಲ್ಲಿ ಎಲ್ಲ ಸೌಂದರ್ಯ ಉತ್ಪನ್ನಗಳನ್ನು ನ್ಯಾಚುರಲ್ಸ್ ಬಿಎಇ ಸಾದರಪಡಿಸಲಿದ್ದು, ಅದರೊಂದಿಗೆ ಸಾಟಿಯಿಲ್ಲದ ಶಾಪಿಂಗ್ ಅನುಭವವನ್ನು ದೊಡ್ಡ ಸಂಖ್ಯೆಯ ಗ್ರಾಹಕರಿಗೆ ಸಾದರಪಡಿಸಲಿದೆ” ಎಂದು ವೀಣಾ ಹೇಳುತ್ತಾರೆ.   ಮೇಕಪ್‌ಗಾಗಿ ಸ್ಮಾರ್ಟ್ ಮಿರ‍್ಸ್, ಡಿಐವೈ ಶೇಡ್ ಕ್ರಿಯೇಟರ್‌ಗಳು ಮತ್ತು ಪರಿಣತರಿಂದ ಚರ್ಮದ ಆರೈಕೆ ಕುರಿತ ಶಿಫಾರಸುಗಳ ಜೊತೆಗೆ ಪ್ರತಿ ಬಿಎಇ ಮಳಿಗೆ ಗ್ರಾಹಕರಿಗೆ ತಲ್ಲೀನಗೊಳಿಸುವ ಅನುಭವದ ಖಾತ್...

ತ್ಯಾಗ ಬಲಿದಾನ ಸ್ಮರಿಸುವ, ಹಜ್ ಯಾತ್ರೆ ಕೈಗೊಳ್ಳುವ ಮಹತ್ವದ ಹಬ್ಬ ಬಕ್ರೀದ್

ಇಮೇಜ್
ನಿಡಗುಂದಿ:ನಗರದಲ್ಲಿ ಇಂದು ಬೆಳಿಗ್ಗೆ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ ಅನ್ನು ಅತೀ ಸಂಭ್ರಮದಿಂದ ಆಚರಿಸಲಾಯಿತು.ಯಿದುಲ್ ಹಜ್ ಹಾ ನಮಾಜ್ ಚಾಂದ್ ತಾರಾ ಮಸೀದಿಯಲ್ಲಿ ಮಾಡಲಾಯಿತು.ನಮಾಜ್ ನೆರವೇರಿಸಿದ ಮೌಲಾನಾ ರವರಿಗೆ ಧನ್ಯವಾದ ಸಲ್ಲಿಸಿದರು. ಜೀಲ್ ಹಜ್ ನಿಮಿತ್ಯವಾಗಿ ಕಾಲೇಜ ರೊಡನಿಂದ ಚಾಂದ್ ತಾರಾ ಮಸೀದ್ ವರೆಗೆ ತಖಬೀರ ಹೇಳುತ್ತಾ ಆಗಮಿಸಿದರು. ಜೀಲ್ ಹಜ್ ದ ನಮಾಜ್ ನೆರವೇರಿಸಿದರು.        ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬ. ಈ ಹಬ್ಬದ ಶುಭ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಯಾತ್ರೆಯನ್ನು ನೆರವೇರಿಸುತ್ತಾರೆ.      ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮುದ್ದೇಬಿಹಾಳ,ಎಂ,ಐ ಕಲಾಲ್, ಹಾಜಿ ಹಾಸನಸಾಬ್ ಮನಗೂಳಿ, ಅಮೀರ ರಮಜಾ ಅಕ್ಕಲಕೋಟ ಹಾಗೂ ಸಮಾಜದ ಅಪಾರ ಪ್ರಮಾಣದಲ್ಲಿ ಭಾಗಿಯಾಗಿದ್ದರು.

ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಕೈಜೋಡಿಸುವಂತೆ ಉದ್ದಿಮೆದಾರರಿಗೆ ಕರೆ : ಪ್ರವಾಸೋದ್ಯಮ ಸಚಿವ ಡಾ. ಎಚ್‌.ಕೆ ಪಾಟೀಲ

ಇಮೇಜ್
  -  ದಕ್ಷಿಣ ಭಾರತ ಉತ್ಸವದಲ್ಲಿ  4200  ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ -  ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ದಿಗೆ ಎಫ್‌ಕೆಸಿಸಿಐ ಕೊಡುಗೆ ಶ್ಲಾಘನೀಯ   ಬೆಂಗಳೂರು ಜೂನ್‌  16:   ಶಕ್ತಿ ಯೋಜನೆಯಿಂದಾಗಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇಕಡಾ  50%  ರಷ್ಟು ಹೆಚ್ಚಾಗಿದೆ. ಈ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ವ್ಯಾಪಕ ಅವಕಾಶವಿದೆ. ದಕ್ಷಿಣ ಭಾರತ ಉತ್ಸವ ದ ಮೂಲಕ ಹರಿದು ಬಂದಿರುವ ಸುಮಾರು  4200  ಕೋಟಿ ರೂಪಾಯಿಗಳ ಹೂಡಿಕೆಯ ಜೊತೆಗೆ ಇನ್ನಷ್ಟು ಹೆಚ್ಚು ಹಣವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ಬಳಸುವಂತೆ ಪ್ರವಾಸೋದ್ಯಮ ಹಾಗೂ ಕಾನೂನು ಸಚಿವರಾದ ಡಾ. ಎಚ್‌.ಕೆ ಪಾಟೀಲ ಅವರು ಕರೆ ನೀಡಿದರು.   ಇಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಭಾರತ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅವರು ಮಾತನಾಡಿದರು.   ದಕ್ಷಿಣ ಭಾರತ ರಾಜ್ಯಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ದಿಗೆ ವಿಫುಲ ಅವಕಾಶಗಳಿವೆ. ಅವುಗಳಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಎಫ್‌ಕೆಸಿಸಿಐ ಆಯೋಜಿಸಿರುವ ಈ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಈ ಉತ್ಸವದ ಮೂಲಕ ಸುಮಾರು ೪...

ಸಾಂಸ್ಕೃತಿಕ ರಾಷ್ಟ್ರೀಯತೆಯ ಮೂಲಕ ಬಂಧುತ್ವ ಗಟ್ಟಿಗೊಳಿಸಬೇಕಾಗಿದೆ ; ಡಾ.ಪ್ರಕಾಶ ಖಾಡೆ

ಫೋರ್ಟ್ ಬ್ಲೇರ್ (ಅಂಡಮಾನ್ ) ಜೂನ್ 16. ಸಾಂಸ್ಕೃತಿಕ ರಾಷ್ಟ್ರೀಯತೆಯ ಮೂಲಕ ರಾಜ್ಯ ರಾಜ್ಯಗಳ ನಡುವೆ ಗಾಢವಾದ ಬಂಧುತ್ವವನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಬಾಗಲಕೋಟೆಯ ಸಾಹಿತಿ ಡಾ.ಪ್ರಕಾಶ ಖಾಡೆ ಹೇಳಿದರು.ಅವರು                ಶನಿವಾರ 15 ರಂದು ಅಂಡಮಾನ್ ದ ಫೋರ್ಟ್ ಬ್ಲೇರ್ ದಲ್ಲಿ ಜರುಗಿದ ಹತ್ತೋಂಬತ್ತನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್ ಹಾಗೂ ಹೃದಯವಾಹಿನಿ ಕರ್ನಾಟಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪೋರ್ಟ್ ಬ್ಲೇರ್ ನ ಕನ್ನಡ ಸಂಘ ಅಂಡಮಾನ್ ಸಹಯೋಗದಲ್ಲಿ ಹತ್ತೋಂಬತ್ತನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.                       ಸ್ಥಳೀಯ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚರಣೆ,ಜಾನಪದ, ಮತ್ತು ದೇಸಿ ಜ್ಞಾನವನ್ನು ರಾಜ್ಯ ರಾಜ್ಯಗಳ ನಡುವೆ ವಿನಿಮಯ ಮಾಡುತ್ತ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ವ್ಯಾಪಕಗೊಳಿಬೇಕಾಗಿದೆ ಎಂದೂ ಖಾಡೆ ಹೇಳಿದರು. ಕವಿಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಅರ್ಚನಾ ಅಥಣಿ,ಪ್ರೊ.ಬಿಂಡಿಗನವೀಲೆ ಭಗವಾನ, ಆರೀಫ್ ಕಲ್ಕಟ್ಟ, ಆರತಿ ಸುರೇಶ್ ಮತ್ತು ಮನು ಮಂಗಳೂರು ತಮ್ಮ ಕವಿತೆ ವಾಚಿಸಿದರು..ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ರಾಷ್ಟ್ರ...