ಪೋಸ್ಟ್‌ಗಳು

ಏಪ್ರಿಲ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉಪ ಚುನಾವಣೆ ಫಲಿತಾಂಶದ ದಿನ ಬಾಗಲಕೋಟೆಯಲ್ಲಿ ಹೋಳಿ ಸಂಭ್ರಮ: ಗೆಲುವು ಯಾರಿಗೆ?

ಇಮೇಜ್
ಬಾಗಲಕೋಟೆ: ಬಾಗಲಕೋಟ ಉಪ ಚುನಾವಣೆಯ ಮತದಾನ ಏಪ್ರಿಲ್ 9ರಂದು ನಡೆದಿದ್ದು, ಇದೀಗ ಎಲ್ಲರ ಕಣ್ಣು ಮೇ 4ರ ಫಲಿತಾಂಶದತ್ತ ನೆಟ್ಟಿದೆ. ಜಿಲ್ಲೆಯಾದ್ಯಂತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಫಲಿತಾಂಶದ ದಿನವನ್ನು ‘ರಾಜಕೀಯ ಹೋಳಿ’ಯಂತೆ ಕಾತರದಿಂದ ಕಾಯಲಾಗುತ್ತಿದೆ.  ಈ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಠಿಣ ಪೈಪೋಟಿ ಕಂಡುಬಂದಿದೆ. ವಿಶೇಷವಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕೆಲ ರಾಜಕೀಯ ವಲಯಗಳಲ್ಲಿ ಅವರಿಗೆ ಮುನ್ನಡೆ ಇದೆ ಎನ್ನುವ ವಿಶ್ಲೇಷಣೆಗಳೂ ಹರಿದಾಡುತ್ತಿವೆ. ಆದರೆ ಅಂತಿಮ ತೀರ್ಪು ಮತದಾರರದ್ದಾಗಿದ್ದು, ಫಲಿತಾಂಶದ ದಿನವೇ ನಿಜ ಸ್ಥಿತಿ ಬಹಿರಂಗವಾಗಲಿದೆ. ಮೇ 4ರಂದು ಫಲಿತಾಂಶ ಹೊರಬರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಬಣ್ಣದ ಹಬ್ಬದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಗೆಲುವು ಸಾಧಿಸುವ ಪಕ್ಷದ ಕಾರ್ಯಕರ್ತರು ಬಣ್ಣ ಎರಚಿಕೊಂಡು ಸಂಭ್ರಮಾಚರಣೆ ನಡೆಸಲು ಸಜ್ಜಾಗಿರುವುದು ಈಗಾಗಲೇ ಗೋಚರಿಸುತ್ತಿದೆ. ಹೀಗಾಗಿ ‘ರಾಜಕೀಯ ಹೋಳಿ’ ಎಂಬ ಪದಪ್ರಯೋಗ ಸ್ಥಳೀಯವಾಗಿ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಬಾಗಲಕೋಟೆಯಲ್ಲಿ ಹೋಳಿ ಹಬ್ಬವು ವಿಶಿಷ್ಟ ಪರಂಪರೆ ಹೊಂದಿದ್ದು, ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇತ್ತೀಚೆಗೆ ಹೋಳಿ ಹಬ್ಬ ಮುಕ್ತಾಯಗೊಂಡಿದ್ದರೂ...

ಹುನಗುಂದದಲ್ಲಿ ಕಾಶಪ್ಪನವರ್ ಪ್ರಭಾವ ಮುಂದುವರಿಕೆ 2028ರತ್ತ ರಾಜಕೀಯ ಚಟುವಟಿಕೆ ವೇಗ

ಇಮೇಜ್
ಹುನಗುಂದ, : ಉತ್ತರ ಕರ್ನಾಟಕದ ರಾಜಕೀಯ ಸಮೀಕರಣಗಳಲ್ಲಿ ಹುನಗುಂದ ವಿಧಾನಸಭಾ ಕ್ಷೇತ್ರವು ಪ್ರಮುಖ ಸ್ಥಾನವನ್ನು ಹೊಂದಿದ್ದು, ಈ ಕ್ಷೇತ್ರದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ್ ಅವರು ಕಳೆದ ದಶಕದಲ್ಲಿ ಗಮನಾರ್ಹ ರಾಜಕೀಯ ಪ್ರಭಾವವನ್ನು ನಿರ್ಮಿಸಿಕೊಂಡಿದ್ದಾರೆ. ಸ್ಥಳೀಯ ಸಮಸ್ಯೆಗಳ ಮೇಲೆ ಕೇಂದ್ರೀಕೃತ ಕಾರ್ಯಪದ್ಧತಿ, ಸಂಘಟನೆ ಬಲ ಮತ್ತು ಜನಸಂಪರ್ಕದ ಮೂಲಕ ಅವರು ಕ್ಷೇತ್ರ ಮಟ್ಟದಿಂದ ರಾಜ್ಯ ಮಟ್ಟದವರೆಗೆ ತಮ್ಮ ಸ್ಥಾನವನ್ನು ಹಂತ ಹಂತವಾಗಿ ಗಟ್ಟಿಗೊಳಿಸಿಕೊಂಡಿದ್ದಾರೆ. ಜುಲೈ 01, 1972ರಂದು ಜನಿಸಿದ ಅವರು, ಕುಟುಂಬದ ರಾಜಕೀಯ ಹಿನ್ನೆಲೆಯಿಂದ ಪ್ರೇರಿತವಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಆರಂಭಿಕ ಹಂತದಲ್ಲೇ ಗ್ರಾಮ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಹಾಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳ ಮೂಲಕ ಅವರು ಜನರ ವಿಶ್ವಾಸವನ್ನು ಗಳಿಸಿದರು. ಹುನಗುಂದ ಕ್ಷೇತ್ರದ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಶೈಲಿ ಅವರಿಗೆ ರಾಜಕೀಯವಾಗಿ ಬಲ ನೀಡಿತು. ಚುನಾವಣಾ ಪಯಣದಲ್ಲಿ ಗೆಲುವು ಮತ್ತು ಸೋಲಿನ ನಡುವೆಯೂ ತಮ್ಮ ನೆಲೆಯನ್ನು ಉಳಿಸಿಕೊಂಡು ಮತ್ತೆ ಗೆಲುವು ಸಾಧಿಸಿರುವುದು ಅವರ ರಾಜಕೀಯ ಸ್ಥೈರ್ಯವನ್ನು ತೋರಿಸುತ್ತದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು, ಕಾರ್ಯಕರ್ತರೊಂದಿಗೆ ಸಂಪರ್ಕ ಮತ್ತು ಸಮುದಾಯ ಮಟ್ಟದ ಸಮನ್ವಯದ ಮೂಲಕ ಅವರು ತಮ್ಮ ಪ್ರಭಾವವನ್ನು ಇನ್ನಷ್ಟ...

ಬಾಗಲಕೋಟ ಉಪ ಚುನಾವಣೆ : ಮತ ಎಣಿಕೆ ಸಿಬ್ಬಂದಿಗಳಿಗೆ ತರಬೇತಿ

ಇಮೇಜ್
ಬಾಗಲಕೋಟೆ,: ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮೇ 4ರಂದು ನಡೆಯಲಿರುವ ಮತ ಎಣಿಕೆ ಕಾರ್ಯದ ಹಿನ್ನಲೆಯಲ್ಲಿ, ಮತ ಎಣಿಕೆ ಸಿಬ್ಬಂದಿಗಳಿಗೆ ಜಿಲ್ಲಾ ಆಡಳಿತವು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಈ ತರಬೇತಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, ಮತ ಎಣಿಕೆ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು. ಮತ ಎಣಿಕೆ ಕಾರ್ಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಈಗಾಗಲೇ ಕೇಂದ್ರವನ್ನು ಸಂಪೂರ್ಣ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು. ಮತ ಎಣಿಕೆಗೆ ಒಟ್ಟು 14 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್‌ಗೆ ಮೇಲ್ವಿಚಾರಕ, ಸಹಾಯಕ ಹಾಗೂ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಒಟ್ಟು 63 ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಮತ್ತು 2 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸ್ಕ್ಯಾನಿಂಗ್‌ಗಾಗಿ ವಿಶೇಷ ಟೇಬಲ್ ಕೂಡ ಇರಿಸಲಾಗಿದೆ. ಮಾಸ್ಟರ್ ಟ್ರೈನರ್ ಶಶಿಶೇಖರ ರೆಡ್ಡಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಮತ ಎಣಿಕೆ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ವಿವರಿಸಿದರು. ವಿವಿಎಂ ಯಂತ್ರಗಳ ಬಳಕೆ, ವಿವಿಪ್ಯಾಟ್ ಸ್ಲಿಪ್ ಪರಿಶೀಲನೆ ಹಾಗೂ ಮತ ಎಣಿಕೆ ವೇಳೆ ಪಾಲಿ...

ಮಾಹಿತಿ ಹಕ್ಕು ಕಾಯ್ದೆ: ಜನಪರ, ಪ್ರಜಾಪ್ರಭುತ್ವದ ಭದ್ರ ಬುನಾದಿ – ಆಯುಕ್ತ ಚನ್ನಾಳ

ಇಮೇಜ್
ಬೆಳಗಾವಿ, ಏ.27: ಮಾಹಿತಿ ಹಕ್ಕು ಕಾಯ್ದೆ ಜನಪರವಾಗಿದ್ದು, ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ತಿಳಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಅತ್ಯಂತ ಕ್ರಾಂತಿಕಾರಕ ಕಾಯ್ದೆಯಾಗಿರುವ ಮಾಹಿತಿ ಹಕ್ಕು ಕಾಯ್ದೆ ಸಾಮಾನ್ಯ ಜನರಿಗೆ ಸರ್ಕಾರದ ಮಾಹಿತಿ ಸುಲಭವಾಗಿ ತಲುಪುವ ಉದ್ದೇಶದಿಂದ 2005ರ ಅಕ್ಟೋಬರ್ 12ರಂದು ಜಾರಿಗೆ ಬಂದಿದೆ ಎಂದು ಅವರು ಹೇಳಿದರು. ಈ ಕಾಯ್ದೆಯನ್ನು ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದರು. ಕರ್ನಾಟಕ ಮಾಹಿತಿ ಆಯೋಗವು ಕಳೆದ ಒಂದು ವರ್ಷದಲ್ಲಿ ದೇಶದಲ್ಲೇ ದಾಖಲೆ ಪ್ರಮಾಣದಲ್ಲಿ 40 ಸಾವಿರಕ್ಕೂ ಹೆಚ್ಚು ದ್ವೀತಿಯ ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಬೆಳಗಾವಿ ಪೀಠದಲ್ಲಿ ಪ್ರತಿದಿನ 40ರಿಂದ 60 ಅರ್ಜಿಗಳ ವಿಚಾರಣೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸರಬರಾಜು, ಸ್ವಚ್ಛತೆ ಮತ್ತು ಆರೋಗ್ಯ ಸೇರಿದಂತೆ ಮೂಲ ಸೌಕರ್ಯಗಳ ಕುರಿತು ಬಂದ ಅರ್ಜಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾಹಿತಿ ನೀಡಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ದಂಡ ವಿಧಿಸುವುದರ ಜೊತೆಗೆ ಅರ್ಜಿದಾರರಿಗೆ ಪರಿಹಾರ ನೀಡುವ ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದು ಹೇಳಿದರು....

ಬಿಸಿಲಿನ ತಾಪಮಾನ ಏರಿಕೆ: ಸಾರ್ವಜನಿಕರಿಗೆ ಎಚ್ಚರಿಕೆ | ವೀಣಾ ಕಷಾಪ್ಪನವರು

ಇಮೇಜ್
ಸಾರ್ವಜನಿಕರಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯವಾಗಿದೆ.  ಬಿಸಿಲಿನ ತೀವ್ರತೆಯಿಂದ ದೇಹದಲ್ಲಿ ನೀರಿನ ಕೊರತೆ, ತಲೆನೋವು, ದೌರ್ಬಲ್ಯ ಹಾಗೂ ಹೀಟ್ ಸ್ಟ್ರೋಕ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಜನರು ಅಗತ್ಯವಿಲ್ಲದ ಹೊರಗಡೆ ಹೋಗುವುದನ್ನು ತಪ್ಪಿಸಿ, ಸಾಕಷ್ಟು ನೀರು ಕುಡಿಯುವುದು ಮತ್ತು ಹಗುರವಾದ ಆಹಾರ ಸೇವಿಸುವುದು ಉತ್ತಮ. ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಬಿಸಿಲಿನ ತಾಪಮಾನ ಹೆಚ್ಚು ಇರುವುದರಿಂದ ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ. ಹೊರಗೆ ಹೋಗಬೇಕಾದರೆ ಟೋಪಿ, ಉಂಬ್ರೆಲ್ಲಾ ಅಥವಾ ತುಪ್ಪಟ್ಟೆ ಬಳಸಿ ದೇಹವನ್ನು ರಕ್ಷಿಸಿಕೊಳ್ಳಬೇಕು. ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ವಿಶೇಷವಾಗಿ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ದೇಹದಲ್ಲಿ ಯಾವುದೇ ಅಸಹಜ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದರು.

ಬಾಗಲಕೋಟ ಉಪಚುನಾವಣೆ ಗದ್ದಲದ ಬಳಿಕ ಕಾಂಗ್ರೆಸ್ ಶಾಕ್: ಮೂವರು ನಾಯಕರ ಮೇಲೆ ಕ್ರಮ

ಇಮೇಜ್
ಬಾಗಲಕೋಟ ಉಪಚುನಾವಣೆಯ ಬಳಿಕ ಆಕ್ಷನ್: ಕಾಂಗ್ರೆಸ್‌ನಿಂದ 3 ನಾಯಕರು ಔಟ್!  ಬಾಗಲಕೋಟೆ : ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮಗಳು ತೀವ್ರಗೊಂಡಿದ್ದು, ಪಕ್ಷ ವಿರೋಧ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಹಲವು ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚಿನ ಉಪಚುನಾವಣೆಯಲ್ಲಿ ಕಮತಗಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಮುರುಗೇಶ ಕಡ್ಲಿಮಟ್ಟಿ, ಗುರು ಪಾಟೀಲ್ ಹಾಗೂ ರಮೇಶ್ ಜಮಖಂಡಿ ವಿರುದ್ಧ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ, ಈ ಇಬ್ಬರು ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿಗೆ ವಿರೋಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಪಕ್ಷದ ಶಿಸ್ತುಗೆ ಧಕ್ಕೆಯಾಗಿದೆ ಎಂದು ಸ್ಥಳೀಯ ಮುಖಂಡರು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಿಗೆ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, “ದೂರುವನ್ನು ಕೆಪಿಸಿಸಿ (KPCC)ಗೆ ಕಳುಹಿಸಲಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದರೆ ಪಕ್ಷದಿಂದ ಹೊರಹಾಕುವ ಕ್ರಮವೂ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸ...

ಬದಾಮಿ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ ಯಾರಿಗೆ?

ಇಮೇಜ್
ಬದಾಮಿ ವಿಧಾನಸಭಾ ಕ್ಷೇತ್ರ: 2018–2023 ಫಲಿತಾಂಶಗಳ ಹಿನ್ನೆಲೆ, 2028ರ ರಾಜಕೀಯ ಸಮೀಕರಣಗಳು ಮತ್ತು ಹನುಮಂತ ಬಿ. ಮಾವಿನಮರದ್ ಮೇಲಿನ ಕಣ್ಣಿಟ್ಟು ಕಾಯುತ್ತಿರುವ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬದಾಮಿ ವಿಧಾನಸಭಾ ಕ್ಷೇತ್ರವು ಕಳೆದ ಎರಡು ಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ನಿರಂತರವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು 67,599 ಮತಗಳು ಪಡೆದು, ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರು ಪಡೆದ 65,903 ಮತಗಳು ವಿರುದ್ಧ ಅತಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಅದೇ ವೇಳೆ ಜೆಡಿಎಸ್ ಅಭ್ಯರ್ಥಿ ಹನಮಂತ ಬಿ. ಮಾವಿನಮರದ್ ಅವರು 24,484 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಬದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಹಿಡಿತವನ್ನು ಉಳಿಸಿಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮನಸೇನ ಚಿಮ್ಮನಕಟ್ಟಿ ಅವರು 65,845 ಮತಗಳು ಪಡೆದು ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಶಾಂತಗೌಡ ತಿರ್ಲಗೌಡ ಪಾಟೀಲ್ ಅವರು 56,120 ಮತಗಳು ಪಡೆದರೆ, ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಸ್ಪರ್ಧಿಸಿದ ಹನಮಂತ ಬಿ. ಮಾವಿನಮರದ್ ಅವರು 41,572 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಈ ಫಲಿತಾಂಶಗಳಲ್ಲಿ ಗಮನಾರ್ಹ ಅಂಶವೆಂದರೆ, ಜೆಡಿಎಸ್ ಅಭ್ಯರ್ಥಿ ಹನಮಂತ ಬಿ. ಮಾವಿನಮರದ್ ಅವರ ಮತಗಳ ಪ್ರಮಾಣದಲ್ಲಿ ಉಂಟಾದ ಗಣನೀಯ ಏರಿಕ...

ಎಡ-ಬಲ ಜಾತಿಗಳಿಗೆ 5.25% - ಅಲೆಮಾರಿ ಜಾತಿಗಳಿಗೆ 4.5% ಮೀಸಲಾತಿ

ಇಮೇಜ್
ಬೆಂಗಳೂರು, ಏ.24: ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳಿಗೆ ಸಮಾನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟವು ಮಹತ್ವದ ತೀರ್ಮಾನ ಕೈಗೊಂಡಿದೆ. ಎಡಗೈ, ಬಲಗೈ ಹಾಗೂ ಇತರ ಅಲೆಮಾರಿ ಸಮುದಾಯಗಳಿಗೆ ಕ್ರಮವಾಗಿ 5.25%, 5.25% ಹಾಗೂ 4.5% ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ Siddaramaiah ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್‌ನ ಶೇ.50 ಮೀಸಲಾತಿ ಮಿತಿ ಅನುಸಾರ ಪರಿಶಿಷ್ಟ ಜಾತಿಗಳೊಳಗಿನ ಒಳಮೀಸಲಾತಿಯನ್ನು ಮರುನಿಗದಿಪಡಿಸಲಾಗಿದೆ. ಅದರಂತೆ ಪರಿಶಿಷ್ಟ ಜಾತಿಗೆ 15% ಹಾಗೂ ಪರಿಶಿಷ್ಟ ಪಂಗಡಗಳಿಗೆ 3% ಮೀಸಲಾತಿ ನೀಡಲಾಗಿದೆ ಎಂದು ವಿವರಿಸಿದರು. ಹಿಂದಿನ 17% ಮೀಸಲಾತಿಯಲ್ಲಿ 6%, 6% ಹಾಗೂ 5% ಹಂಚಿಕೆ ಇದ್ದರೆ, ಈಗಿನ 15% ಮೀಸಲಾತಿಗೆ 5.3%, 5.3% ಹಾಗೂ 4.4% ಎಂದು ತಾಂತ್ರಿಕ ಸಮಿತಿಯ ವರದಿ ನೀಡಿದೆ. ಅಂತಿಮವಾಗಿ ಸಚಿವ ಸಂಪುಟವು ಎಡಗೈ ಸಮುದಾಯಗಳಿಗೆ 5.25%, ಬಲಗೈ ಸಮುದಾಯಗಳಿಗೆ 5.25% ಹಾಗೂ ಬೋವಿ, ಲಂಬಾಣಿ, ಕೊರಚ, ಕೊರಮ ಸೇರಿದಂತೆ 59 ಅಲೆಮಾರಿ ಜಾತಿಗಳಿಗೆ 4.5% ಮೀಸಲಾತಿ ನೀಡಲು ತೀರ್ಮಾನಿಸಿದೆ. ಈ ನಿರ್ಧಾರದಿಂದ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ದೊರೆಯಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ ಈ ಹೊಸ ಹಂಚಿಕೆಯ ಪ್ರಕಾರ ಅನ್ವಯವಾಗಲಿದೆ. ಶೇ.6ರಷ್ಟು ...

ನವಲಿಹಿರೇಮಠ್ ಬಿಜೆಪಿ ಸೇರ್ಪಡೆ ಸುಳಿವು?: ಹುನಗುಂದ ರಾಜಕೀಯದಲ್ಲಿ 2028ಕ್ಕೆ ಹೊಸ ರಾಜಕೀಯ ಲೆಕ್ಕಾಚಾರ

ಇಮೇಜ್
ಹುನಗುಂದ: ವಿಧಾನಸಭಾ ಕ್ಷೇತ್ರದ ಇತ್ತೀಚಿನ ರಾಜಕೀಯ ಚರ್ಚೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ರಾಜಶೇಖರ ನವಲಿಹಿರೇಮಠ. ಪರಂಪರാഗത ಪಕ್ಷಗಳ ಪೈಪೋಟಿಯ ನಡುವೆ ಸ್ವತಂತ್ರ ಪ್ರಭಾವವನ್ನು ನಿರ್ಮಿಸಿಕೊಂಡಿರುವ ಅವರು, 2023ರ ಚುನಾವಣೆಯ ಬಳಿಕ ಕ್ಷೇತ್ರದ ರಾಜಕೀಯ ಸಮೀಕರಣಗಳನ್ನು ಮರುಸಂರಚಿಸಿದ ನಾಯಕರೆಂದು ಪರಿಗಣಿಸಲಾಗುತ್ತಿದೆ.             ------ನೆಲಮಟ್ಟದ ಸಂಪರ್ಕವೇ ಬಲ------ 62 ವರ್ಷದ ನವಲಿಹಿರೇಮಠ್ ವೃತ್ತಿಯಿಂದ ಗುತ್ತಿಗೆದಾರರಾಗಿದ್ದು, ಸಮಾಜ ಸೇವೆಯ ಮೂಲಕ ಗ್ರಾಮೀಣ ಭಾಗದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. ಹುನಗುಂದ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ದೇವಾಲಯ ಅಭಿವೃದ್ಧಿ, ಸಮುದಾಯ ಕಾರ್ಯಕ್ರಮಗಳ ಬೆಂಬಲ—ಇವುಗಳ ಮೂಲಕ ಅವರು ಸ್ಥಳೀಯ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದಾರೆ. ವಿಶೇಷವಾಗಿ, ಹತ್ತುಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಗಳ ಪ್ರತಿಷ್ಠಾಪನೆಗೆ ಮುಂದಾಗಿರುವುದು ಅವರ ಸಮಾಜಮುಖಿ ಚಟುವಟಿಕೆಯ ಒಂದು ಭಾಗವಾಗಿದೆ. ಈ ರೀತಿಯ ಕಾರ್ಯಗಳಿಂದ ಯುವಜನತೆ ಮತ್ತು ಗ್ರಾಮೀಣ ಮತದಾರರಲ್ಲಿ ಅವರ ಪ್ರಭಾವ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.           ------ಗ್ರಾಮ ಮಟ್ಟದಲ್ಲಿ ಬಲವಾದ ಜಾಲ----- ನವಲಿಹಿರೇಮಠ್ ಅವರ ಪ್ರಮುಖ ಶಕ್ತಿ ಎಂದರೆ ಪ್ರತಿ ಗ್ರಾಮದಲ್ಲಿಯ...

ಎಸ್‌ಎಸ್‌ಎಲ್‌ಸಿ ಪಾಸ್ ಸಂಭ್ರಮವೇ ದುಃಖಕ್ಕೆ ತಿರುಗಿತು!ಬಾವಿಯಲ್ಲಿ ಮುಳುಗಿ ವಿದ್ಯಾರ್ಥಿ ದಾರುಣ ಸಾವು

ಇಮೇಜ್
ಕೋಲಾರ, ಏ.23: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸಂಭ್ರಮ ಮನೆ ಮಾಡಿದ್ದರೂ, ಕೋಲಾರ ಜಿಲ್ಲೆಯಲ್ಲಿ ಸಂತೋಷದ ಕ್ಷಣವೇ ಶೋಕ ಸಾಗರವಾಗಿ ಮಾರ್ಪಟ್ಟಿದೆ. ಪರೀಕ್ಷೆಯಲ್ಲಿ ಉತ್ತೀರ್ಣನಾದ ಖುಷಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ ವಿದ್ಯಾರ್ಥಿಯೊಬ್ಬ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮುಳಬಾಗಿಲು ತಾಲ್ಲೂಕಿನಲ್ಲಿ ನಡೆದಿದೆ. ಘಟನೆಯ ವಿವರ: ಮುಳಬಾಗಿಲು ತಾಲ್ಲೂಕಿನ ಸೊಣ್ಣವಾಡಿ ಗ್ರಾಮದ ನಿವಾಸಿ ಕಿರಣ್ (15) ಮೃತ ವಿದ್ಯಾರ್ಥಿ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಬಳಿಕ ಕಿರಣ್ ತನ್ನ ಫಲಿತಾಂಶವನ್ನು ವೀಕ್ಷಿಸಿ ಉತ್ತೀರ್ಣನಾಗಿದ್ದನು. ಇದರಿಂದ ಉಲ್ಲಾಸಗೊಂಡ ಆತ ತನ್ನ ಸ್ನೇಹಿತರೊಂದಿಗೆ ಗ್ರಾಮದ ಸಮೀಪದ ಬಾವಿಗೆ ಈಜಲು ತೆರಳಿದ್ದನು. ದುರಂತ ಹೇಗೆ? ಬಾವಿಗೆ ಇಳಿದ ವೇಳೆ ಅದರ ಆಳದ ಅರಿವಿಲ್ಲದ ಕಿರಣ್, ಈಜಾಡುವಾಗ ಆಕಸ್ಮಿಕವಾಗಿ ನೀರಿನ ಆಳಕ್ಕೆ ಸಿಲುಕಿದ್ದಾನೆ. ಮೇಲಕ್ಕೆ ಬರಲಾಗದೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ಆತಂಕದಿಂದ ಕೂಗಾಡಿದ್ದು, ಸ್ಥಳೀಯರು ತಕ್ಷಣ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ: ಘಟನೆಯ ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾವಿಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ.   ಗ್ರಾಮದಲ್ಲಿ ಶೋಕ ವಾತಾವರಣ: ಸಂಭ್ರಮದ ಕ್ಷಣದಲ್ಲಿ ಸಂಭವಿಸಿದ ಈ ದುರಂತದಿಂದ ಸೊಣ್ಣವಾಡಿ ಗ್ರಾಮದಲ್ಲಿ ಮೌನ ಆವರಿಸಿದ್ದು, ಕ...

ತಾಯಿಯ ಅಂತ್ಯಕ್ರಿಯೆಗೂ ಬರಲಿಲ್ಲ ಮಕ್ಕಳು..! ನೀವೇ ಸುಟ್ಟು ಹಾಕಿ” ಎಂದ ಮಕ್ಕಳು..!

ಇಮೇಜ್
ಬೆಳಗಾವಿ: ಹೆತ್ತ ತಾಯಿ ದೈವಕ್ಕೆ ಸಮಾನ ಎಂದು ಹೇಳುವ ಸಮಾಜದಲ್ಲೇ ಮನಸ್ಸು ನೊಂದಿಸುವ ಘಟನೆ ಒಂದು ಬೆಳಕಿಗೆ ಬಂದಿದೆ. ನಗರದ ಶಾಹೂನಗರ ಪ್ರದೇಶದಲ್ಲಿ ನಡೆದ ಈ ಪ್ರಕರಣ ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ. ತಮ್ಮನ್ನು ಒಂಬತ್ತು ತಿಂಗಳು ಹೊತ್ತು ಸಾಕಿ ಬೆಳೆಸಿದ ತಾಯಿ ಮೃತಪಟ್ಟಾಗ, ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಬೇಕಿದ್ದ ಮಕ್ಕಳೇ ಕ್ರೂರವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ತಾಯಿ ನಿಧನವಾದ ವಿಷಯ ತಿಳಿಸಿದರೂ ಮಕ್ಕಳು ಆಗಮಿಸಲು ನಿರಾಕರಿಸಿದ್ದು, “ನಮಗೆ ಸಮಯವಿಲ್ಲ, ನೀವೇ ಸುಟ್ಟು ಹಾಕಿ” ಎಂದು ಹೇಳಿದರೆಂದು ತಿಳಿದುಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದ್ದು, ಕುಟುಂಬ ಮೌಲ್ಯಗಳ ಕುಸಿತದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಹೆತ್ತವರ ಮೇಲಿನ ಗೌರವ ಮತ್ತು ಜವಾಬ್ದಾರಿ ಮರೆತು ಹೋಗುತ್ತಿರುವ ಕಾಲದಲ್ಲಿ ಇಂತಹ ಘಟನೆಗಳು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿವೆ. ಮಕ್ಕಳು ಕೈಬಿಟ್ಟ ಈ ಸಂದರ್ಭದಲ್ಲಿ, ಸಮಾಜಸೇವಕ ಶಂಕರ್ ಪಾಟೀಲ್ ಹಾಗೂ ಅವರ ತಂಡ ಮಾನವೀಯತೆ ತೋರಿದರು. ಅವರು ಮುಂದೆ ಬಂದು ಆ ತಾಯಿಯ ಅಂತ್ಯಕ್ರಿಯೆಯನ್ನು ಸಕಲ ವಿಧಿವಿಧಾನಗಳೊಂದಿಗೆ ನೆರವೇರಿಸಿ ಮಾನವೀಯ ಮೌಲ್ಯಗಳನ್ನು ಉಳಿಸಿದರು. ರಕ್ತ ಸಂಬಂಧಗಳು ದೂರವಾದಾಗ, ಯಾವುದೇ ಸಂಬಂಧವಿಲ್ಲದವರು ಮಗನ ಸ್ಥಾನದಲ್ಲಿ ನಿಂತು ಗೌರವ ಸಲ್ಲಿಸಿರುವುದು ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತವಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಈ ಘಟನೆ “ತಾಯಿ ದೇವರು” ಎಂದು ಹೇ...

ಆಸ್ತಿ ಇದ್ದರೂ ಸೈಕಲ್ ಆಯ್ಕೆ! ಗಿಣಿಗೇರಿಯ ಶಿವಪ್ಪನ ಸರಳ ಜೀವನ ಎಲ್ಲರಿಗೂ ಪಾಠ

ಇಮೇಜ್
ಗಂಗಾವತಿ (ಕೊಪ್ಪಳ):ಇಂದಿನ ವೇಗದ ಯುಗದಲ್ಲಿ ಎಲ್ಲರೂ ಬೈಕ್‌, ಕಾರುಗಳ ಹಿಂದೆ ಓಡುತ್ತಿರುವಾಗ, ಗಂಗಾವತಿ ತಾಲೂಕಿನ ಗಿಣಿಗೇರಿ ಗ್ರಾಮದ ರೈತ ಶಿವಪ್ಪನವರು ತಮ್ಮ ವಿಭಿನ್ನ ನಡೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಕಷ್ಟು ಆಸ್ತಿ ಇದ್ದರೂ ಕೂಡ ಅವರು ಇವತ್ತು ಸುಮಾರು ₹7,000 ಮೌಲ್ಯದ ಹೊಸ ಸೈಕಲ್ ಖರೀದಿಸಿದ್ದಾರೆ. ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಾಗಿರುವವರು ಆಧುನಿಕ ವಾಹನಗಳತ್ತ ಆಕರ್ಷಿತರಾಗುತ್ತಾರೆ. ಆದರೆ ಶಿವಪ್ಪನವರು ಅದಕ್ಕೆ ವಿರುದ್ಧವಾಗಿ ಸರಳ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. “ನಮಗೆ ಇರುವುದೇ ಸಾಕು, ಸರಳವಾಗಿ ಬದುಕಿದರೆ ಸಾಕು” ಎಂಬ ನಿಲುವು ಅವರ ಜೀವನ ಶೈಲಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಗ್ರಾಮದಲ್ಲಿ ರೈತರಾಗಿ ಗುರುತಿಸಿಕೊಂಡಿರುವ ಶಿವಪ್ಪನವರು, ಭೂಮಿಯೊಂದಿಗೆ ಹೊಂದಿಕೊಂಡ ಜೀವನವನ್ನೇ ಮೆಚ್ಚಿದ್ದಾರೆ. ಸೈಕಲ್‌ ಬಳಸುವುದರಿಂದ ಆರೋಗ್ಯಕ್ಕೂ ಲಾಭ, ಪರಿಸರಕ್ಕೂ ಹಿತ ಎಂಬ ಅರಿವು ಅವರಲ್ಲಿದೆ. ಇಂದಿನ ಕಾಲದಲ್ಲಿ ವಾಹನ ಖರೀದಿ ಸಾಮರ್ಥ್ಯ ಇದ್ದರೂ ಅದನ್ನು ತ್ಯಜಿಸಿ ಸರಳತೆಯನ್ನು ಆರಿಸಿಕೊಂಡಿರುವುದು ಗಮನಾರ್ಹವಾಗಿದೆ. ಯಾಕೆ ಸೈಕಲ್‌ ಆಯ್ಕೆ? ಶಿವಪ್ಪನವರ ಈ ನಿರ್ಧಾರ ಕೇವಲ ವಾಹನದ ಆಯ್ಕೆ ಮಾತ್ರವಲ್ಲ, ಅದು ಒಂದು ಜೀವನ ಮೌಲ್ಯ. ಅನಾವಶ್ಯಕ ಖರ್ಚು, ಪ್ರದರ್ಶನವನ್ನು ಬಿಟ್ಟು, ಅಗತ್ಯಕ್ಕೆ ತಕ್ಕ ಜೀವನವೇ ಉತ್ತಮ ಎಂಬ ಸಂದೇಶವನ್ನು ಅವರು ನೀಡುತ್ತಿದ್ದಾರೆ. ಸೈಕಲ್‌ ಬಳಕೆ ಇಂಧನ ಉಳಿವು, ಪರ...

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟ: ವಿದ್ಯಾರ್ಥಿಗಳ ನಿರೀಕ್ಷೆಗೆ ತೆರೆ

ಇಮೇಜ್
2026ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಫಲಿತಾಂಶವು ಇಂದು ಅಧಿಕೃತವಾಗಿ ಪ್ರಕಟವಾಗಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸಿದೆ.  ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯ ಮೂಲಕ ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಹಾಗೂ kseab.karnataka.gov.inಗಳಲ್ಲಿ ಫಲಿತಾಂಶ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ‘KarnatakaOne’ ಮೊಬೈಲ್ ಆಪ್ ಮೂಲಕವೂ ಫಲಿತಾಂಶ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ, ಅಭ್ಯರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೇರವಾಗಿ ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ಫಲಿತಾಂಶದ ವಿವರಗಳನ್ನು ಕಳುಹಿಸುವ ವ್ಯವಸ್ಥೆಯನ್ನು ಮಂಡಳಿಯು ಜಾರಿಗೆ ತಂದಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.  ಶಾಲೆಗಳ ಮುಖ್ಯಸ್ಥರಿಗೆ ಮಂಡಳಿಯ ಲಾಗಿನ್ ಮೂಲಕ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪಟ್ಟಿಯನ್ನು ಲಭ್ಯಗೊಳಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಭೇಟಿ ನೀಡಿ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಬಹುದು. ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಈ ಫಲಿತಾಂಶ ಮಹತ್ವದ್ದಾಗಿದ್ದು, ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದಾರೆ...

ಬಾಗಲಕೋಟೆಯಲ್ಲಿ ಲಂಚ ಬಲೆ: ಇಬ್ಬರು ಪೊಲೀಸ್ ಸಿಬ್ಬಂದಿ ರೆಡ್‌ಹ್ಯಾಂಡ್ ಬಂಧನ

ಇಮೇಜ್
ಬಾಗಲಕೋಟೆ, ಏಪ್ರಿಲ್ 22: ಕೆರೂರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಒಬ್ಬರು ಸೇರಿ ₹1.70 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿದೆ. ಬೆಳಗಂಟಿ ಕೆರೂರ ಗ್ರಾಮದ ಮುತ್ತಪ್ಪ ಹುಲ್ಲಪ್ಪ ನಾಯ್ಕರ  ಏಪ್ರಿಲ್ 21ರಂದು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಪ್ರಕಾರ, ಅವರ ಸ್ನೇಹಿತ ಶಂಕ್ರಪ್ಪ ಬೂದಿಹಾಳ ಅವರನ್ನು ಏಪ್ರಿಲ್ 17ರಂದು ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಮೋಟಾರ್‌ಸೈಕಲ್ (ಕೆಎ-29 ಇಸಿ-0914) ವಾಪಸು ಕೊಡಲು ಹಾಗೂ ಪ್ರಕರಣದಿಂದ ಬಿಡಿಸಲು ₹1,70,000 ಲಂಚ ಬೇಡಿಕೆಯಿಟ್ಟಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಏಪ್ರಿಲ್ 18ರಂದು ಅವರನ್ನು ಬಿಡುಗಡೆ ಮಾಡಿ, ಲಂಚದ ಹಣ ನೀಡುವಂತೆ ಒತ್ತಾಯ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಪ್ರಿಲ್ 22ರಂದು ದಾಳಿ ನಡೆಸಿ, ಕೆರೂರ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಸಂತೋಷ ಬಿರಾದಾರರನ್ನು ಲಂಚ ಸ್ವೀಕರಿಸುವ ವೇಳೆ ಬಂಧಿಸಿದರು. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸುರೇಶರೆಡ್ಡಿ ಎಂ.ಎಸ್., ಪಿಐಗಳಾದ ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ ಹಾಗೂ ...

ಸುತಗುಂಡರದಲ್ಲಿ ದ್ಯಾಮವ್ವ ದೇವಿ ಜಾತ್ರೆ: ಸಂಪ್ರದಾಯ–ಭಕ್ತಿಯ ಅದ್ಧೂರಿ ಆಚರಣೆ

ಇಮೇಜ್
ಬಾಗಲಕೋಟೆ:ಆಲಮಟ್ಟಿ ಸಮೀಪದ ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮ ಇಂದು ಭಕ್ತಿಯ ಸಂಭ್ರಮದಲ್ಲಿ ಮಿಂಚುತ್ತಿದೆ. ಕೃಷ್ಣ ನದಿಯ ತೀರದ ಸಮೀಪವಿರುವ ಈ ಹಳ್ಳಿ ಪ್ರಕೃತಿಯ ಸಾಂದ್ರತೆಯ ನಡುವೆ ಸಂಪ್ರದಾಯಗಳ ಸವಿಯನ್ನು ನೀಡುತ್ತದೆ. ಇಂದಿನ ದಿನ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆ ನಡೆಯುತ್ತಿದ್ದು, ಗ್ರಾಮದ ಜನರು ಭಕ್ತಿ ಭಾವದಿಂದ ಭಾಗವಹಿಸಿದ್ದಾರೆ. ಗ್ರಾಮದೆಲ್ಲೆಡೆ ಭಜನೆ, ಕೀರ್ತನೆಗಳು ನಡೆಯುತ್ತಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮನೆಮನೆಗಳಲ್ಲಿ ರಂಗೋಲಿ, ದೇವಸ್ಥಾನಗಳಲ್ಲಿ ವಿಶಿಷ್ಟ ಅಲಂಕಾರ ಹಾಗೂ ನಾದಸ್ವರ ಧ್ವನಿಗಳು ಹಬ್ಬದ ಸಂಭ್ರಮ ಹೆಚ್ಚಿಸಿವೆ. ದ್ಯಾಮವ್ವ ತಾಯಿ ಈ ಗ್ರಾಮದ ರಕ್ಷಕ ದೇವತೆ ಎಂಬ ನಂಬಿಕೆ ಜನಗಳಲ್ಲಿ ಗಾಢವಾಗಿದೆ. ಕುಟುಂಬದಲ್ಲಿ ವೈಯಕ್ತಿಕ ಕಷ್ಟಗಳು ಎದುರಾದಾಗ ಗ್ರಾಮಸ್ಥರು ದ್ಯಾಮವ್ವ ತಾಯಿ ದೇವಸ್ಥಾನಕ್ಕೆ ಹೋಗಿ ತಮ್ಮ ಕಷ್ಟಗಳನ್ನು ಬೇಡಿಕೊಳ್ಳುತ್ತಾರೆ. ತಾಯಿಯ ಮುಂದೆ ಮನಸ್ಸು ತೆರೆಯುತ್ತ ಪ್ರಾರ್ಥಿಸಿದರೆ ಎಲ್ಲಾ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ಭರವಸೆ ಗ್ರಾಮಸ್ಥರಲ್ಲಿದೆ. ಗ್ರಾಮದ ಹಿರಿಯರು, ಯುವಕರು ಒಂದಾಗಿ ಸೇರಿ ಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಆಚರಣೆಗಳಲ್ಲಿ ಶಿಸ್ತೂ, ಭಕ್ತಿಭಾವವೂ ಮಿಳಿತಗೊಂಡಿದ್ದು, ಪ್ರತಿಯೊಬ್ಬರಲ್ಲೂ ಉತ್ಸಾಹ ತುಂಬಿದ...

ಮಹಿಳಾ ಮೀಸಲಾತಿ ಅಪಪ್ರಚಾರ ವಿರೋಧಿಸಿ ನಾಳೆ ಪ್ರತಿಭಟನೆ

ಇಮೇಜ್
ಬಾಗಲಕೋಟೆ , ಏ.21: ಮಹಿಳಾ ಮೀಸಲಾತಿ ವಿಚಾರದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಏ.22ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ . ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದು, ಮಹಿಳೆಯರ ಹಕ್ಕುಗಳ ಪರ ಸದಾ ನಿಂತಿದೆ. ಆದರೆ ಈ ವಿಷಯದಲ್ಲಿ ಬಿಜೆಪಿ ನಾಯಕರು ಸುಳ್ಳು ಮಾಹಿತಿಯನ್ನು ಹಬ್ಬಿಸಿ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಅಪಪ್ರಚಾರ ಖಂಡನೆ ಹಾಗೂ ಮಹಿಳಾ ಹಕ್ಕುಗಳ ರಕ್ಷಣೆಗೆ ಪ್ರತಿಭಟನೆ ಆಯೋಜಿಸಲಾಗಿದೆ. ಜಿಲ್ಲೆಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಲಾಗಿದೆ. ಪ್ರತಿಭಟನೆ ಬಸವೇಶ್ವರ ಸರ್ಕಲ್‌ನಲ್ಲಿ ಬುಧವಾರ (ಏ.22) ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ. “ ಮಹಿಳಾ ಮೀಸಲಾತಿ ಕುರಿತು ಸತ್ಯವನ್ನು ಜನತೆಗೆ ತಲುಪಿಸುವುದು ನಮ್ಮ ಕರ್ತವ್ಯ. ಬಿಜೆಪಿ ನಡೆಸುತ್ತಿರುವ ಸುಳ್ಳು ಪ್ರಚಾರವನ್ನು ಖಂಡಿಸುತ್ತೇವೆ,” ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರಾ ಗುಳಬಾಳ ಹಾಗೂ ಬ್ಲಾಕ್ ಅಧ್ಯಕ್ಷೆ ರೇಣುಕಾ ನ್ಯಾಮಗೌಡ ತಿಳಿಸಿದ್ದಾರೆ.

ಬಿಸಿಲಿನಿಂದ ಹೈರಾಣಾದ ಜನರಿಗೆ ತಂಪಿನ ಸುದ್ದಿ: ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಇಮೇಜ್
ಬೆಂಗಳೂರು, ಏ.19: ರಾಜ್ಯದಲ್ಲಿ ಉಷ್ಣಾಂಶ ಏರಿಕೆಯಿಂದ ಜನಜೀವನ ಸಂಕಷ್ಟಕ್ಕೊಳಗಾಗಿರುವ ಸಂದರ್ಭದಲ್ಲಿ, ಇಂಡಿಯಾ ಮೀಟರೊಲಾಜಿಕಲ್ ಡಿಪಾರ್ಟ್ಮೆಂಟ್ರಾ ಜ್ಯದಾದ್ಯಂತ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಅನೇಕ ಭಾಗಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಬಿಸಿಲಿನ ತಾಪದಿಂದ ಜನರು ಹೈರಾಣಾಗಿದ್ದಾರೆ. ಈ ನಡುವೆಯೇ ಮಳೆಯ ಸೂಚನೆ ಹೊರಬಿದ್ದಿರುವುದು ಸ್ವಲ್ಪ ತಂಪು ನೀಡುವಂತಾಗಿದೆ. ಏಪ್ರಿಲ್ 21ರಂದು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಅದೇ ರೀತಿ ಏಪ್ರಿಲ್ 22 ಮತ್ತು 23ರಂದು ಸಹ ಮಳೆಯ ಪ್ರಮಾಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದಲ್ಲದೆ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಕೂಡ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲವೆಡೆ ಗುಡುಗು, ಮಿಂಚು ಹಾಗೂ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ...

ನಗುತ್ತಲೇ ಹೃದಯ ಗೆದ್ದ ನವಾಬ್ — ಇಂದು ನೆನಪು ಮಾತ್ರ

ಇಮೇಜ್
ನಮ್ಮ ಜೀವನದಲ್ಲಿ ಕೆಲವರು ಕೇವಲ ಸ್ನೇಹಿತರಲ್ಲ… ಅವರು ನಮ್ಮ ದಿನಗಳ ಬೆಳಕು, ನಮ್ಮ ನಗುವಿನ ಕಾರಣ, ನಮ್ಮ ನೆನಪಿನ ನಿತ್ಯ ಅಸ್ತಿತ್ವವಾಗಿರುತ್ತಾರೆ. ಅಂಥವರಲ್ಲಿ ಒಬ್ಬನೇ ನಮ್ಮ ಪ್ರೀತಿಯ ಗೆಳೆಯ ನವಾಬ್. 2020ರಿಂದ ಇಲ್ಲಿಯವರೆಗೆ ನಮ್ಮ ಜೊತೆ ಇದ್ದ ನವಾಬ್, ಕೇವಲ ಸ್ನೇಹಿತನಲ್ಲ — ನಮ್ಮ ಬದುಕಿನ ಒಂದು ಭಾಗವಾಗಿದ್ದನು. ಎಲ್ಲರ ಜೊತೆ ನಗುನಗುತ, ಸದಾ ಹಾಸ್ಯ ಮಾಡುತ್ತ, ಎಲ್ಲರ ಮನ ಗೆದ್ದ ಆ ನಗುಮುಖದ ಗೆಳೆಯ ಇವತ್ತು ನಮ್ಮೊಂದಿಗೆ ಇಲ್ಲ ಎಂಬ ವಿಚಾರವೇ ನಂಬಲಾರದ ನೋವನ್ನು ಉಂಟುಮಾಡುತ್ತದೆ. ನಿನ್ನೆ ಅವನ ಸಾವಿನ ಸುದ್ದಿ ಕೇಳಿದ ಕ್ಷಣದಿಂದಲೇ ನಮ್ಮ ಹೃದಯದಲ್ಲಿ ಒಂದು ಖಾಲಿತನ ಮೂಡಿದೆ. ನಮ್ಮ 20 ಜನ ಸ್ನೇಹಿತರ ಬಳಗದಲ್ಲಿ ನವಾಬ್ ಇಲ್ಲ ಅನ್ನೋದನ್ನು ಒಪ್ಪಿಕೊಳ್ಳೋದು ತುಂಬಾ ಕಷ್ಟವಾಗಿದೆ. “ನವಾಬ್ ಇಲ್ಲ” ಅನ್ನೋ ಮಾತು ನಮ್ಮ ಮನಸ್ಸಿಗೆ ಇಳಿಯುತ್ತಿಲ್ಲ. ನಿನ್ನೆ ಎಲ್ಲಾ ಸ್ನೇಹಿತರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದ ನಮ್ಮ ಆತ್ಮೀಯ ಗೆಳೆಯರು, ಗೆಳತಿಯರು ಎಲ್ಲರೂ ವಿಡಿಯೋ ಕಾಲ್ ಮಾಡಿ “ಅವನ ಮುಖ ಒಮ್ಮೆ ತೋರಿಸಿ” ಎಂದು ಕೇಳಿಕೊಂಡರು. ಆದರೆ ನಾವು ಅಲ್ಲಿಗೆ ತಲುಪುವಷ್ಟರಲ್ಲಿ ನಮ್ಮ ಗೆಳೆಯನ ಅಂತಿಮ ವಿಧಿವಿಧಾನಗಳು ಮುಗಿದಿದ್ದವು. ನಮಗೂ ಅವನ ಮುಖವನ್ನು ಕೊನೆಯ ಬಾರಿ ನೋಡುವ ಭಾಗ್ಯ ಸಿಗಲಿಲ್ಲ. ಆ ಕ್ಷಣ ನಮ್ಮ ಮನಸ್ಸಿಗೆ ಇನ್ನಷ್ಟು ನೋವು ತಂದಿತು. ನಮ್ಮ ಎಲ್ಲಾ ಸ್ನೇಹಿತರೂ ಕೂಡ ಆ ದುಃಖವನ...

ಜೀವಾವಧಿ ಶಿಕ್ಷೆ ಎಂದರೇನು? ವಿನಯ್‌ ಕುಲಕರ್ಣಿ ಪ್ರಕರಣದ ಹಿನ್ನೆಲೆ

ಇಮೇಜ್
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್‌ 17ರಂದು ತೀರ್ಪು ನೀಡಿದೆ. ಈ ತೀರ್ಪಿನ ಹಿನ್ನೆಲೆ “ಜೀವಾವಧಿ ಶಿಕ್ಷೆ” ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ. ಜೀವಾವಧಿ ಶಿಕ್ಷೆ ಎಂದರೇನು? ಕಾನೂನು ಪ್ರಕಾರ ಜೀವಾವಧಿ ಶಿಕ್ಷೆ ಎಂದರೆ ಅಪರಾಧಿಯು ತನ್ನ ಇಡೀ ಜೀವನಾವಧಿಯವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ. ಕೊಲೆ, ಅತ್ಯಾಚಾರ ಸೇರಿದಂತೆ ಗಂಭೀರ ಅಪರಾಧಗಳಿಗೆ ಈ ಶಿಕ್ಷೆ ವಿಧಿಸಲಾಗುತ್ತದೆ. ಜೀವಾವಧಿ ಎಂದರೆ ಕೇವಲ 14 ಅಥವಾ 20 ವರ್ಷಗಳ ಶಿಕ್ಷೆ ಅಲ್ಲ ಎಂದು ಸ್ಪಷ್ಟಪಡಿಸಿದೆ. 14 ವರ್ಷಗಳ ವಿಷಯವೇನು? ಸಾಮಾನ್ಯವಾಗಿ ಜೀವಾವಧಿ ಶಿಕ್ಷೆ 14 ವರ್ಷಗಳಷ್ಟೇ ಎಂಬ ತಪ್ಪು ಕಲ್ಪನೆ ಇದೆ. ವಾಸ್ತವದಲ್ಲಿ, 14 ವರ್ಷ ಎನ್ನುವುದು ಬಿಡುಗಡೆ ಪರಿಗಣಿಸಲು ಇರುವ ಕನಿಷ್ಠ ಅವಧಿ ಮಾತ್ರ. ಸರ್ಕಾರ ಕೈದಿಯನ್ನು ಕ್ಷಮಾದಾನ ಅಥವಾ ಶಿಕ್ಷೆ ಕಡಿತದ ಮೂಲಕ ಬಿಡುಗಡೆ ಮಾಡಲು ಯೋಚಿಸಿದರೆ, ಕನಿಷ್ಠ 14 ವರ್ಷ ಜೈಲು ವಾಸ ಪೂರೈಸಿರಬೇಕು. ಬಿಡುಗಡೆ ಸಾಧ್ಯತೆ ಇದೆಯೇ? ಸರ್ಕಾರ ಕೈದಿಯ ಸನ್ನಡತೆ, ಆರೋಗ್ಯ ಮತ್ತು ಇತರ ಅಂಶಗಳನ್ನು ಪರಿಗಣಿಸಿ ಪೆರೋಲ್ ಅಥವಾ remission (ಶಿಕ್ಷೆ ಕಡಿತ) ನೀಡಬಹುದು. ಪೆರೋಲ್ ಮೂಲಕ ಕೈದಿ ತಾತ್ಕಾಲಿಕವಾಗಿ ಹೊರಬರಬಹುದು. ಆದರೆ ಇದು ಹಕ್ಕು ಅಲ್ಲ...

ಅಣ್ಣ-ತಮ್ಮಂದಿರಿಬ್ಬರೊಂದಿಗೆ ವಿವಾಹವಾದ ಮಹಿಳೆಗೆ ಪುತ್ರ ಜನನ:ಸಿರ್ಮೌರ್ ಘಟನೆಗೆ ದೇಶಾದ್ಯಂತ ಗಮನ

ಇಮೇಜ್
  ಸಿ ರ್ಮೌರ್‌ನಲ್ಲಿ ಅಪರೂಪದ ಸಂಪ್ರದಾಯ: ಅಣ್ಣ-ತಮ್ಮಂದಿರಿಬ್ಬರ ಪತ್ನಿಯಾದ ಮಹಿಳೆಗೆ ಗಂಡು ಮಗು ಜನನ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲೊಂದು ಅಪರೂಪದ ಕುಟುಂಬ ಸಂಪ್ರದಾಯ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಅಣ್ಣ-ತಮ್ಮಂದಿರಿಬ್ಬರನ್ನು ವಿವಾಹವಾಗಿದ್ದ ಸುನೀತಾ ಚೌಹಾಣ್ ಅವರಿಗೆ ಗಂಡು ಮಗು ಜನಿಸಿದ್ದು, ಈ ಸಂತಸದ ಸುದ್ದಿಯನ್ನು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಸುನೀತಾ ಅವರು ಪ್ರದೀಪ್ ನೇಗಿ ಹಾಗೂ ಕಪಿಲ್ ನೇಗಿ ಎಂಬ ಸಹೋದರರನ್ನು ವಿವಾಹವಾಗಿದ್ದು, ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಇಂದಿಗೂ ನಡೆದುಬರುತ್ತಿರುವ ‘ಜೋಡಿದಾರ್’ ಅಥವಾ ಬಹುಪತಿತ್ವ ಪದ್ಧತಿಯಂತೆಯೇ ಈ ವಿವಾಹ ನಡೆದಿದೆ. ಈ ಪದ್ಧತಿಯಲ್ಲಿ ಜನಿಸುವ ಮಗುವಿಗೆ ಡಿಎನ್ಎ ಪರೀಕ್ಷೆ ಮಾಡುವ ಪದ್ಧತಿ ಇಲ್ಲದೆ, ಮಗು ಇಬ್ಬರು ಪತಿಗಳಿಗೂ ಸೇರಿದಂತೆಯೇ ಪರಿಗಣಿಸಲಾಗುತ್ತದೆ. ಮಗುವಿನ ಜನನದಿಂದ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದ್ದು, ಮನೆಯಲ್ಲಿದ್ದ ಒಬ್ಬ ಪತಿ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದರೆ, ವಿದೇಶದಲ್ಲಿರುವ ಇನ್ನೊಬ್ಬ ಪತಿ ಸಾಮಾಜಿಕ ಜಾಲತಾಣದ ಮೂಲಕ ತನ್ನ ಸಂತೋಷವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಇತಿಹಾಸಾತ್ಮಕವಾಗಿ ಆಸ್ತಿ ವಿಭಜನೆ ತಪ್ಪಿಸಲು ಇಂತಹ ಪದ್ಧತಿಗಳು ಹುಟ್ಟಿಕೊಂಡಿದ್ದವು ಎಂದು ಹೇಳಲಾಗುತ್ತದೆ. ಆಧುನಿಕ ಯುಗದಲ್ಲೂ ಈ ಸಂಪ್ರದಾಯ ಮುಂದುವರಿಯುತ್ತಿರುವುದು ಜನರ ಗಮನ ಸೆಳೆದಿದ್ದ...

ಉಪಚುನಾವಣೆಯಲ್ಲಿ ಗದ್ದಲ: ಕಾಂಗ್ರೆಸ್ ನಾಯಕರ ಗುರು ಪಾಟೀಲ್, ರಮೇಶ್ ಜಮಖಂಡಿ ವಿರುದ್ಧ ದೂರು: ಕ್ರಮಕ್ಕೆ ಒತ್ತಾಯ

ಇಮೇಜ್
ಉಪಚುನಾವಣೆಯಲ್ಲಿ ಪಕ್ಷ ವಿರೋಧ ಚಟುವಟಿಕೆ: ಕ್ರಮಕ್ಕೆ ಕೆಪಿಸಿಸಿ ಮುಂದೆ ದೂರು ಬಾಗಲಕೋಟೆ: ಇತ್ತೀಚಿನ ಉಪಚುನಾವಣೆಯಲ್ಲಿ ಕಮತಗಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆದಿದೆಯೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಗುರು ಪಾಟೀಲ್ ಹಾಗೂ ರಮೇಶ್ ಜಮಖಂಡಿ ವಿರುದ್ಧ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಜಿಲ್ಲೆ ಕಾಂಗ್ರೆಸ್ ಸಮಿತಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಈ ಇಬ್ಬರು ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿಗೆ ವಿರೋಧವಾಗಿ ನಡೆದುಕೊಂಡಿದ್ದಾರೆ ಅಂತಾ ಆರೋಪ ಮಾಡಲಾಗಿದೆ. ಇದರಿಂದ ಪಕ್ಷದ ಶಿಸ್ತುಗೆ ಧಕ್ಕೆಯಾಗಿದೆ ಅಂತ ಸ್ಥಳೀಯ ನಾಯಕರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಅವರು, “ಈ ದೂರನ್ನು ಈಗಾಗಲೇ ಕೆಪಿಸಿಸಿ (KPCC)ಗೆ ಕಳುಹಿಸಿದ್ದೀವಿ. ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಇವತ್ತು ಅಥವಾ ನಾಳೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ್ತೀವಿ. ಬೇಕಾದ್ರೆ ಅವರನ್ನು ಪಕ್ಷದಿಂದ ಹೊರಹಾಕೋ ಕ್ರಮವೂ ಕೈಗೊಳ್ಳ್ತೀವಿ” ಅಂತ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಾಗರಾಜ ಷ ಹದ್ಲಿ, ರಾಜು ಮನ್ನಿಕೇರಿ, ಚಂದ್ರಶೇಖರ್ ರಾಠೋಡ್ ಹಾಗೂ ಅಕ್ಬರ್ ಮುಲ್ಲಾ ಉಪಸ್ಥಿತರಿದ್ದರು.

ಅಜಯಕುಮಾರ್ ಸರನಾಯಕಗೆ ಎಂಎಲ್ಸಿ ಕೊಡ್ತಾರಾ? 2028 ಚುನಾವಣಾ ತಂತ್ರದಲ್ಲಿ ಪ್ರಮುಖ ಹೆಸರು!

ಇಮೇಜ್
ಅಜಯಕುಮಾರ್ ಸರನಾಯಕ: ಶ್ರದ್ಧೆ, ತ್ಯಾಗ ಮತ್ತು ಜನಸೇವೆ—MLC ಸ್ಥಾನಕ್ಕೆ ಯೋಗ್ಯ ನಾಯಕ ಬಾಗಲಕೋಟೆ  : ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಸರಳತೆ, ನಿಷ್ಠೆ ಮತ್ತು ತ್ಯಾಗದ ಮೂಲಕ ಜನಮನ ಗೆದ್ದ ನಾಯಕರೆಂದರೆ ಅಜಯಕುಮಾರ್ ಸರನಾಯಕ. ಕಳೆದ ಹಲವು ದಶಕಗಳಿಂದ ರಾಜಕೀಯ ಜೀವನದಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ, ತಮ್ಮದೇ ಆದ ಪ್ರಾಮಾಣಿಕತೆ ಮತ್ತು ಶಿಸ್ತುಗಳಿಂದ ಗುರುತಿಸಿಕೊಂಡಿರುವ ಇವರಿಗೆ ಈಗ ವಿಧಾನ ಪರಿಷತ್ ( ಎಂಎಲ್ಸಿ) ಸ್ಥಾನ ನೀಡಬೇಕೆಂಬ ಜನಾಭಿಪ್ರಾಯ ಹೆಚ್ಚಾಗುತ್ತಿದೆ. ಅಜಯಕುಮಾರ್ ಸರನಾಯಕ ಅವರು 1989 ರಿಂದ 1994 ರವರೆಗೆ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದರು. ಆ ಅವಧಿಯಲ್ಲಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕನಾಗಿ ಹೆಸರುವಾಸಿಯಾದರು. 1994 ರಿಂದ 1997 ರವರೆಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಸಂಪುಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಯುವಜನತೆಗೆ ಉತ್ತೇಜನ ನೀಡುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿದರು. 1998ರಲ್ಲಿ ಲೋಕಶಕ್ತಿ ಪಕ್ಷದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ತಮ್ಮ ರಾಜಕೀಯ ಗುರುಗಳಾದ ರಾಮಕೃಷ್ಣ ಹೆಗಡೆ...